Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅಂಬೇಡ್ಕರ ಅವರ ಹೆಸರಿನಲ್ಲಿ ಸಿನಿಮಾ ಮಾಡಿದಕ್ಕೆ ರೌಡಿ ಶೀಟರ್ ಮಾಡಿದ ಕಾಂಗ್ರೆಸ್ ಸರ್ಕಾರ
Posted date: 29 Mon, Apr 2024 03:34:52 PM
ತುಳಿತಕ್ಕೆ ಒಳಗಾದ ಸಮುದಾಯಗಳ ಮೊಟ್ಟ ಮೊದಲ ಸಿನಿಮಾ, ಕೋಲಾರ ನೆಲದ ಮೊದಲ ಸಿನಿಮಾ, ನಮ್ಮ ದೇಶದ ಸಂವಿಧಾನದ ಶಕ್ತಿಯನ್ನು ತೋರುವ ಚಲನ ಚಿತ್ರ ದ ರೂಲರ್ಸ್ ಸಿನಿ ತಂಡ ಈಗ ತೊಂದರೆಯಲ್ಲಿದ್ದಾರೆ.

ಕನ್ನಡ ಸಿನಿಮಾ ರಂಗದಲ್ಲಿ ಮೊದಲ ಭಾರಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ವಿಜೃಂಭಣೆಯಿಂದ ತೋರಿಸುವ ಪ್ರಯತ್ನ ಮಾಡಿರುವ ದ ರೂಲರ್ಸ್ ಚಿತ್ರದ ನಾಯಕ ನಟ ಸಂದೇಶ್ ರವರ ಮೇಲೆ ಈಗ ನೋಟಿಸ್ ಜಾರಿ ಮಾಡದೇ ರೌಡಿ ಶೀಟರ್ ತೆರೆಯಲಾಗಿದೆ.

ಈ ಸಂಭಂಧ ಮಾತನಾಡಿ ಸಂದೇಶ್ ನನ್ನ ಜನರ ಪರವಾಗಿ 341 ಯಶಸ್ವಿ ಹೋರಾಟಗಳು, 151 ಅಂತರ್ಜಾತೀಯ ವಿವಾಹಗಳನ್ನು ಮಾಡಿ, ಹಲವು ಮಕ್ಕಳಿಗೆ ವಿಧ್ಯಾಭ್ಯಾಸ, ನೂರಾರು ಗುಡಿಸಲು ವಾಸಿಗಳಿಗೆ ಮನೆ ನಿರ್ಮಿಸಿಕೊಟ್ಟಿದ್ದು, ಸಾವಿರಾ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿಸಿಕೊಟ್ಟಿದ್ದೇನೆ.

ನನ್ನ ಜನರ ಪರ ಹೋರಾಟ ಮಾಡುವ ಸಂದರ್ಭಗಳಲ್ಲಿ ನನ್ನ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ನ್ಯಾಯಲಯದಲ್ಲಿ ಪ್ರಕರಣಗಳಲ್ಲಿ ನಮಗೆ ಜಯ ಸಿಕ್ಕಿರುತ್ತದೆ, ಇಲ್ಲಿಯ ತನಕ ನಮ್ಮ‌ ಜನರ ಪರವಾಗಿ ಹೋರಾಟ ಮಾಡಿದ್ದೇನೆ ಹೊರೆತು ಯಾವತ್ತು ಜನರಿಗೆ ತೊಂದರೆ ಕೊಟ್ಟಿಲ್ಲ.

ಇತ್ತಿಚಿಗೆ ಒಂದು ವರ್ಷದಿಂದ ನನ್ನ ಮೇಲೆ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಶಕ್ತಿ ಅಡಿಯಲ್ಲಿ ಚಲನಚಿತ್ರ ಮೂಡಿ ಬಂದಿದ್ದು, ನಮ್ಮ ಸಿನಿಮಾ ಆಡಿಯೋ ಕಾರ್ಯಕ್ರಮ ಮಾರ್ಚ್ 17 ರಂದು ಮಾಡಿರುತ್ತೇವೆ, ಇದನ್ನು ನೋಡಿ ಕೋಪಿಸಿಕೊಂಡ ಮನುವಾದಿಗಳು ಮಾರ್ಚ್ 25 ರಂದ ನನಗೆ ನೋಟಿಸ್ ಸಹ ಜಾರಿ ಮಾಡದೇ ರೌಡಿ ಪಟ್ಟಿ ತೆರೆದಿರುವುದು, ಅದು ನಮ್ಮ ಸರ್ಕಾರದಿಂದಲೇ ಹೀಗೆ ಮಾಡಿರುವುದು ಮನಸ್ಸಿಗೆ ನೋವುಂಟು ಮಾಡಿದೆ ಎಂದ ವಿಡಿಯೋ ಹರಿಬಿಟ್ಟಿದ್ದಾರೆ.

ಬಡತನದಲ್ಲಿರುವ ಹೆಣ್ಣುಮಕ್ಕಳು ಯಾವ ತರ ಸಮಾಜದಲ್ಲಿ ಜೀವನ ಮಾಡಬೇಕು ಎಂದು ತೋರಿಸಿಕೊಟ್ಟಿರುವ ದ ರೂಲರ್ಸ್ ಚಲನ ಚಿತ್ರದ ವಿರುದ್ಧ ನಡೆಯುತ್ತಿರುವ ಎಲ್ಲಾ ಕುತಂತ್ರಗಳನ್ನು ನಿಭಾಯಿಸಿಕೊಂಡು ಬಂದಿರುವ ಸಿನಿಮಾ ತಂಡ ಈಗ ತೊಂದರೆಯಲ್ಲಿರುವುದು ವಿಪರ್ಯಾಸ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಂಬೇಡ್ಕರ ಅವರ ಹೆಸರಿನಲ್ಲಿ ಸಿನಿಮಾ ಮಾಡಿದಕ್ಕೆ ರೌಡಿ ಶೀಟರ್ ಮಾಡಿದ ಕಾಂಗ್ರೆಸ್ ಸರ್ಕಾರ - Chitratara.com
Copyright 2009 chitratara.com Reproduction is forbidden unless authorized. All rights reserved.